Thursday, 1 November 2012


ಅವಳಿಗೆ ಇಷ್ಟವಲ್ಲದ ಅವನ ಗುಣ.................!

ಅವಳೊಳಗೆ ಮುಗಿಯದ ನೆನಪು. ಮಾಗದ ಕನಸು.ತನ್ನವನು ಹೀಗೆ ಇರಬೇಕು ಅಂದುಕೊಳ್ಳುತಾಳೆ ಏನೇನೋ ಕಲ್ಪಿಸಿಕೊಂಡು ಸಂಬ್ರಮಿಸುತಾಳೆ. ಆದರೆ ಎಸ್ಟೋಬಾರಿ ಹಾಗಾಗುದೆ ಇಲ್ಲಾ. ಅವಳು ಅಂದುಕೊಂಡಂತೆ ಅವನು ಅವಳನ್ನು ಬೆಸೆಯುದೆ ಇಲ್ಲ. ನಿಮಗೊತ್ತ? ಪತಿಯ ಕೆಲವು ಗುಣಗಳು ಅವಳಿಗೆ ಇಷ್ಟ ವಾಗುದೆ ಇಲ್ಲ. ನಿರಾಸೆ. ಜಗಳ.ಎಲ್ಲವೂ ಶುರುವಾಗೋದು ಅವನ ಗುಣದಿಂದಲೇ

ಅವಳ birthaday ಗೆ ಅವನೆ ನೆನಪು ಮಾಡಿಕೊಂಡು ವಿಶ್ ಮಾಡಲಿ ಅಂದುಕೊಳ್ಳುತಾಳೆ. ಆದರೆ ಅವನು ಮರೆತು ಬಿಡುತಾನೆ. ಅತ್ತು ಕರೆದು ರಂಪ ಮಾಡಿ ಕೊನೆಗೆ ಅವನು ಅವಳಿಗಾಗಿ birthaday ಪಾರ್ಟಿ ಮಾಡಿದರು
ಅವನು ತನ್ನ ಹುಟ್ಟಿದ ದಿನ  ನೆನಪಿಟ್ಟು ಕೊಂಡಿಲ್ಲ ಅನ್ನೋದೇ ಅವಳ ಚಿಂತೆ

ಕಿರಿಕಿರಿ ಉಂಟುಮಾಡುವಾ ಸಂಗತಿ ಯೊಂದಿದೆ. ಅದೇನೆಂದರೆ ಗಂಡನ ಬೇಜವಾಬ್ದಾರಿ. ತರಕಾರಿ ತರುವುದರಿಂದಾ ಹಿಡಿದು ಮನೆಯ ಬಾಡಿಗೆ ತನಕವೂ ಅವಳೇ ನಿಬಾಇಸಬೇಕು. ನಿರು ಕುಡಿದ ಲೋಟವನ್ನು ತೊಳೆಯುದಿರಲಿ ಸಿಂಕ್ ತನಕವೂ ತೆಗೆದುಕೊಂಡು ಹೋಗಿ ಇಡದ ಗಂಡನ ಮೇಲೆ ಕೆಂಡ ಕಾರುತಾಳೆ  ಅವಳು.ಹಿಂಸೆ ನೀಡುವ ಸಂಗತಿ ಅಂದರೆ ಬಟ್ಟೆ. ಪುಸ್ತ್ತಕ.ಲ್ಯಾಪ್ಟಾಪ್ .ಅನ್ನು ಕಂಡ ಕಂಡಲ್ಲಿ ಬಿಸಾಡುವ ಗಂಡನ ಬೇಜವಾಬ್ದಾರಿ. ನಾನೇನು ನಿಮ್ಮ ಮನೆಯ ಕೆಲಸದವಳಾ ಅಂತಾಳೆ. ಎಲ್ಲಕಿಂತ ಹೆಚ್ಹು ಸಿಟ್ಟು ತರಿಸುದು ಯಾವುದಕ್ಕೆ ಗೊತ್ತ? ಇನ್ನೊಬ್ಬ ಮಹಿಳೆ ಮಾಡುವಾ ಅಡಿಗೆ ಹೊಗಳುವುದು ಅವಳೆದುರು ಇವಳನ್ನು ಕೀಲಾಗಿ ಕಾಣುವ ಪತಿ ಅಂದ್ರೆ ಸತ್ರು ಅನ್ನೋ ಬಾವನೆ ಅವಳಿಗೆ. ಹಾಗಂತ ಅವಳಿಗೆ ಗಂಡನ ಮೇಲೆ ಪ್ರೀತಿ ಇಲ್ಲ ಅಂದಲ್ಲ. ಅವಳು ಗಂಡನನ್ನು ಬಿಟ್ಟು ಕೊಡುವುದೂ ಇಲ್ಲ. ಹೆಣ್ಣಿನ ಮನಸ್ಸೇ ಹಾಗೆ.  


ಮನೆಗೆಸಕ್ಕೆ ಬಾಗಿಯಗಾದೆ. ರಜಾ ದಿನಗಳಲ್ಲಿ ತಾವೊಬ್ಬರೇ ಹೊರಗಡೆ ಹೋಗಿ ಮಾಜಾ ಮಾಡುವ ಗಂಡ ಪತ್ನಿಯ ಬಾವನೆಗಳನ್ನ ಅರ್ಥ ಮಾಡಿಕೊಳ್ಳುದೆ ಇಲ್ಲ ಅಂತ್ತಲ್ಲಾ. ಅವನಿಗೆ ಅವಳಮೇಲೆ ಅಸಹನೆ. ನಿರ್ಲಕ್ಷ ಬಾವನೆಗಳಿವೆ ಅಂತನೂ ಅಲ್ಲ.ಅದೊಂತರ ಅವನು ಬೆಳೆದ. ರೂಡಿಸಿಕೊಂಡು ಬಂದಾ ಬದುಕಿನ ಶೈಲಿ. ಹಾಗಂತ ಅದೇನು ಒಳ್ಳೆಯ ಅಬ್ಯಾಸ ವೆನಲ್ಲಾ. ಅವಳಿಗೂ ತನ್ನ ಪತಿ ಹೀಗೆ ಇರಬೇಕು ಅಂತ ಕನಸುಗಳಿರುತವೆ. ಹಾಗಂತ ಅವಳು ಹೇಳಿದಂತೆ ಬದುಕಿ ಬಿಡುವುದಲ್ಲಾ. ಅವಳ ಇಷ್ಟದಂತೆ ಬದುಕಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ನಿಮ್ಮ ಅಸ್ತಿತ್ವದ ಬುಡ ಅಲ್ಲಾಡುದಿಲ್ಲ ಸ್ನೇಹಿತರೆ ...........

Thursday, 4 October 2012


ಆ ನಂಬರ್ ಡಿಲಿಟ್ ಮಾಡೋಕಾಗಲ್ಲ ...............!

ಹಾಗೆ.... ಅದೊಂದು ಸಂಖ್ಯೆ ಮೊಬೈಲ್ನಲ್ಲಿ ಉಳಿದು ಹೋಗಿದೆ ಡಿಲಿಟ್ ಮಾಡಿಬಿಡೋಣ ಎಂದು ಕೊಂಡಾಗಲೆಲ್ಲ ಮನಸ್ಸು ನೆನಪುಗಳ ಖಜಾನೆ. ಆ   ಸಂಖ್ಯೆಇಂದ  ಇನ್ನು ಯಾವತ್ತಿಗೂ ಕರೆ ಬರುವುದಿಲ್ಲವೆಂದು ಗೊತ್ತಿದರು ಸಹ ಅಳಿಸಲು ಸಾದ್ಯವಾಗುದಿಲ್ಲ ಅವರು ತಮ್ಮ ಬದುಕಿನಿಂದ ಮಾತ್ರ ಎದ್ದುಹೊಗಿಲ್ಲ ಈ ಜಗತ್ತಿನಿಂದಲೇ ಹೊರಟು ಬಿಟ್ಟಿದ್ಧಾರೆ . ಯಾರಹಂಗು ಇಲ್ಲದಂತೆ ತಮ್ಮ ಪಾಡಿಗೆ ಹೋದವರನ್ನು ಮೊಬೈಲ್ ಸಂಕ್ಯೇಯಲ್ಲಾದರು ಹಿಡಿದಿಡುವಾ ಚಿಕ್ಕಯತ್ನ  ಬಾವುಕಥೆಯೋ . ನೆನಪುಗಳ ಋಣವ್ಹೋ. ಗೊತ್ತಿಲ್ಲ!  ಅದ್ಯಾವ ಭಾವವೆಂಬ ಸ್ಪಸ್ಥತೇ ಕೂಡ ಬೇಕಿಲ್ಲ. ಒಟ್ಟಿನಲ್ಲಿ ಆ ಜೀವದೊಂಧಿಗಿದ್ದ ಅಪ್ತ್ತತೆಯನ್ನು ಅವರ ಆ ಸಂಕ್ಯೇಯಲ್ಲಿಯೂ ಕಾಣುವ ಸಾರ್ತಕ್ಯ ಉಳಿದುಬಿಟ್ಟರೆಸಾಕು. 

ಅಷ್ಟಕ್ಕೂ ಅವರು ದಿನನಿತ್ಯದ ಸುಖದುಕ್ಕಗಳನ್ನ ಹಂಚಿಕೊಳ್ಳುವ ಗೆಳೆಯರಾಗಿರಲಿಲ್ಲ . ಅಪರೂಪಕೊಮ್ಮೆ ವಿಚಾರಿಸಿಕೊಳ್ಳುವ ಸ್ನೇಹಿತರಸ್ಟೇ  ಅವರ ಸ್ನೇಹಿತರ ಲಿಸ್ಟಿನಲ್ಲಿ ನಾವು ಎಸ್ಟನೆಯವರೋ. ಏನೋ?  ಆದರೂ ಆ ಮನದಿಂದ ಈ ಮನಕ್ಕೆ ಸೂಕ್ಸ್ಮಾ ಸನಿಹ ಇದ್ದೆಇತ್ತು ಅದು ನಿರ್ಮಿಸಿದ್ದ ಆತ್ಮೀಯ ಬಂದಕ್ಕೆ ಹೆಸರಿಡಲು ಸಾದ್ಯವಿಲ್ಲ. ಕೆಲಾಒಬ್ಬರಬಗ್ಗೆ ಹಾಗಾಗುತ್ತದೆ ಅವರು ಕ್ಲಾಸ್ಮೇಟ್ .ಪ್ರೆಂಡ್. ಗುರು.ಏನೆಲ್ಲಾ ಆಗಿರಬಹುದು. ಅವರು ಬದುಕಿಲ್ಲ ಎನ್ನುವ ಅರಿವಿರುತದೆ ಆದರೆ ಅದರ ಅರಿವೇ ಇಲ್ಲದಂತ್ತೆ ಬದುಕಿಬಿಡೋಣ ಎಂದೆನಿಸುತದೆ ಹಾಗಾಗಿಯೇ ಆ ಸಂಖ್ಯೆಯನ್ನು ಮೊಬೈಲ್ನಲ್ಲಿ ಜಾಗ ಇಲ್ಲದಿದದ್ದಾಗಕೂಡ ಬೇರೆ ಯಾವುದನ್ನೊ ಡಿಲಿಟ್ ಮಾಡಿ ಹೊಸತನಕ್ಕೆ ಎಂಟ್ರಿಕೊಡುತ್ತೆವೆಯೇ ಹೋರತು ಅದನ್ನು ಮುಟ್ಟಲು ಹೋಗುದಿಲ್ಲ ಹೀಗಾಗಿ ಅವರ ನಂಬರಗೆ ಶಾಶ್ವತಸ್ಥಾನ.   ಮೊಬೈಲ್ ಅಲ್ಲದೆ landline ನಂಬರ್ ಆದರೆ ಆಗಾಗ್ಗೆ ವಿಚಿತ್ರಾ ರೋಮಾಂಚನ ಅನುಬವಕ್ಕೆ ಬರುತ್ತದೆ ಅ ಕಡೆಇಂದ ಆಕಸ್ಮಾತ್ ಬೇರೆಯಾರಾದರೂ ಫೋನು ಮಾಡಿದರೆ ಅವರೇ ಇರಬಹುದಾ ಎನ್ನುವಾ ಬ್ರಮೆ ಅತ್ತ ಕಡೆಇಂದ  ಬೇರೆ ದ್ವನಿ ಕೇಳಿದಾಗಲೇ ವಾಸ್ತವದ ಅರಿವು 

ಆತ್ಮಿಯರೋಬ್ಬರಾ  ಗೈರಿನಲ್ಲಿ ಹೀಗಿರುವುದೇ ಆದರ್ಶ ಎಂದೆಲ್ಲಾ ನೆನಪನ್ನು ಉಳಿಸಿಕೊಳ್ಳುದು ಈ ಮೂಲಕ. ಅವರ ನೆನಪುಗಳೇ ಆಗಾಗ ಮುಖಾಮುಕಿ ಆಗೂದು ಅವರು ಇಲ್ಲದಾಗಿನ ತಲ್ಲಣಕ್ಕೆ ಮತೊಮ್ಮೆ ಸಾಕ್ಷಿ ಆಗೋದು ತಪ್ಪಲ್ಲ ಬಂದುಗಳೇ ಹಾಗೆ ಅದಕ್ಕೆ ಬಾವ ಬೇಕಿಲ್ಲ ನೀಡುವಾ ಅನುಭೂತಿಯೊಂದೇ  ಸಾಕು,  ಅದು ನಮ್ಮ ಮನದ ವಿಕ್ನೆಸ್  ಎಂದು
ಮೇಲ್ನೋಟಕ್ಕೆ ಹೇಳಿಬಿಡಬಹುದು ಅಸಲಿಗೆ ಅದು ಸೌಂದರ್ಯ. ಸರಳ. ಸಂವೇದನಾಶೀಲ ಮನದ ಸುಸ್ಥಿತಿಯು ಹೌದು  ಅವರಿಲ್ಲದಾಗಿಯೂ ಅವರ ಸ್ನೇಹಾ ನಮ್ಮನ್ನ ಕಟ್ಟಿಹಾಕುವ ಸಿತಿಗೆ ಇನ್ನೆನುಬಳಸಬಹುದು,

 ಸ್ನೇಹಿತರೆ ಇದನ್ನು ಎಲ್ಲೋ ಓದಿದ ನೆನಪು, ಹಾಗೆ ಮಾಡಲು ಕೆಲಸವಿಲ್ಲದಾಗ ಕೀಬೋರ್ಡ್ ಮೇಲೆ ಕುಟುಕಿದ್ದೇನೆ ಸ್ವಿಕರಿಸುದು ಬಿಡುವುದು ನಿಮಗೆ ಬಿಟ್ಟಿದು, ಒಂದಂತು ನಿಜ ಇದನ್ನ ಓದುವಾಗ ನಾವೂ ಹೀಗೆ ಮಾಡಿದ್ದೆವು ಎನ್ನುವಾ ನೆನಪಂತು ನಿಜ ಅಥವಾ ನಿಮ್ಮಲಿಯು ಇಂಥ ಸಂಖ್ಯೆ ಇರಬಹುದು ಒಮ್ಮೆ ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ ನಿಜ ಅನಿಸಿದರೆ ಕಮೆಂಟ್ ಕೊಡಿ 

Saturday, 1 September 2012



ನಮ್ಮನಗಲಿ ಚಿರನಿದ್ರೆಗೆ ಜಾರಿದ   ನನ್ನ ಪ್ರೀತಿಯ ಅಯ್ಯ ............ ಮರೆತೆನೆಂದರೂ ಮರೆಯಲಾರೆ 



ಬದುಕು ಹೇಗೆ ಬೇಕೋ ಹಾಗೆ ಸಾಗಿದಾಗ ಒಮ್ಮೊಮ್ಮೆ ಕೆಲವು ತಿರುವುಗಳು ಮತ್ತು ವ್ಯಕ್ತಿಗಳು ಅದನ್ನು ಸಾಗ ಬೇಕಾದ ದಾರಿಯಲ್ಲಿ ಸಾಗುವಂತೆ ಮಾಡಿ ದೊಡ್ದವರೆನಿಸಿ ಕೊಳ್ಳುತಾರೆ. ಅದು ಅವರ ಕರ್ತವ್ಯವೋ. ಜವಾಬ್ದರಿಯೋ, ತಿಳಿಯದು!
ನಾನೀಗ ಹೇಳ ಹೊರಟಿರುವುದು ಜೀವನದ ಗೆಲುವಿಗಾಗಿ ಒಂದಷ್ಟು ಪರಿಶ್ರಮ. ತಾಳ್ಮೆ ,ಹೊಂದಾಣಿಕೆ.ತ್ಯಾಗದ ಗುಣಗಳನ್ನು ಬೆಳೆಸಿಕೊಂಡಿದ್ದ ನಮ್ಮ ಅಜ್ಜ(ಅಯ್ಯ)ನ ಬಗ್ಗೆ 

ಬದುಕಿನುದ್ದಕ್ಕೂ ನೋವನ್ನೇ ಉಂಡು ನಮಗೆಲ್ಲ ಸಿಹಿ ಬಡಿಸಿದ ಅಜ್ಜ(ಅಯ್ಯ)ನಮಗೋಸ್ಕರ ಆಸ್ಪತ್ರೆಗೋ .ಶಾಲೆಗೋ.ನೆಂಟರಮನೆಗೋ. ನಮ್ಮನ್ನ ಹೊತ್ತು ಅಲೆದಾಡಿದ್ದ ದಿನಗಳನ್ನು ನೆನೆಸಿಕೊಂಡರೆ ಕರುಳು ಬಾಯಿಗೆ ಬಂದಂತೆ 

ಒಬ್ಬ ವ್ಯಕ್ತಿ ನಮ್ಮ ಬಳಿ ಇರುವಾಗ ಅವರ ಬೆಲೆ ತಿಳಿಯುವುದಿಲ್ಲ ಅವರು ದೂರಹೋದಮೆಲೆಯೇ ಅವರ ಬೆಲೆ ತಿಳಿಯುವುದು ಅನ್ನೋದು ಬರಿ ಆಡು ಮಾತಲ್ಲ ಅನ್ನಿಸಿದ್ದು,

ವಿದಿವಶರಾಗಿ ಅಲ್ಲೆಲ್ಲೋ ದೂರದಲ್ಲಿದ್ದೆ  ಇಲ್ಲಿ ನಡೆಯುತ್ತಿರುವ ಕಾರ್ಯಗಳತ್ತ ಕಣ್ಣಿಟ್ಟಿರುವ ನಮ್ಮಅಜ್ಜ .ಅಯ್ಯ ನಿಗೆ ಉದ್ದಂಡ ನಮಸ್ಕಾರಗಳು  ಈ ಒಂದು ತಿಂಗಳಿಂದ ಪ್ರತಿ ಬಾರಿ ಫೋನ್ ಮಾಡಿದಾಗ ಅಯ್ಯ ನ  ಅನಾರೋಗ್ಯ ತಿಳಿಯುತಲೇ ಇತ್ತು, ಅಯ್ಯ ತುಂಬಾ ಕ್ರುಶನಾಗಿದ್ದಾನೆ, ತನ್ನಷ್ಟಕ್ಕೆ ನಡೆಯಲಾರ,ಮೊನ್ನೆ ಅಂಗಳದಲ್ಲಿ ಆಯತಪ್ಪಿ ಬಿದ್ದ,ಅಯ್ಯ  ಈಗ ಅಸ್ಪತ್ರೆಯಲ್ಲಿದ್ದಾನೆ-ಇಂಥ ವರದಿಯಲ್ಲ ಪ್ರತಿವಾರ ತಿಳಿಯುತ್ತಿದ್ದರೂ ಅಯ್ಯನನ್ನು ಆ ರೀತಿ ನೆನೆಸಿಕೊಳ್ಳಲು ನಮಗೆ ಸಾಧ್ಯವಾಗಲೇ ಇಲ್ಲಾ

. ಯಾಕಂದರೆ ಸದಾ ಚಟುವಟಿಕೆಯಿಂದ ದೊಡ್ಡದನಿಯಲ್ಲಿ ಮಾತಾಡುವ - ನಗುವ, ಇದ್ದಕ್ಕಿದ್ದಂತೆ ಕಣ್ಣುಕೆಂಪಾಗಿಸಿ ಹತ್ತಿರದವರನ್ನು ಹೆದರಿಸುವ, ಮೊಮ್ಮಕ್ಕಳನ್ನ ಸದಾ ಬೈಯುವ , ಪ್ರೀತಿಸುವ,  ಕೊಂಡಾಡುವ, ನಮಗೋಸ್ಕರ ಹಾತೊರೆಯುವ,ಹಾರೈಸುವ, ಅಯ್ಯನನ್ನೇ ಕಂಡಿದ್ದ ನಾವು - ಮರಣಶಯ್ಯೆಯಲ್ಲಿ  ಮಲಗಿದ್ದ ಅಯ್ಯನನ್ನ  ಹೇಗೆ ನೆನೆಸಿಕೊಂಡೆವು

ಹೌದು ನಂಬಲು ಕಹಿಯಾದರು  ಅದೂ ಸತ್ಯ ಅಯ್ಯನನ್ನು ಕೊನೆಗೂ ನೋಡಿದ್ದು ಹೆಣವಾದಮೇಲೆ,ಕೊನೆಯುಸಿರು ಎಳೆಯುವಾಗ ಏನನ್ನೋ ಹೇಳಲು ಒದ್ದಾಡಿ ಹೇಳಲಾಗದೆ ಮನದ ಮಾತನ್ನು ತನ್ನಲ್ಲೇ ಮರೆಮಾಚಿ ವಿದಿಗೆ ಶರಣಾಗಿದ್ದ. ಅಯ್ಯ ಗಾoಬಿರ್ಯವಾಗಿ ಮಾತನಾಡುವಾಗ  ಸಾಕು ಸುಮ್ಮನಿರು ಅನ್ನುತಿದ್ದ ನಾವು, ಕೇಳಲು ರೆಡಿ ಇದ್ದು ಹೇಳು ಹೇಳು ಅಂದ್ರು ಅಯ್ಯ ಮಾತನಾಡದೆ ಹೋಗಿದ್ದ ಇದೆe ಅಲ್ಲವೇ ವಿದಿ  ಬರಹ ಎಂದರೆ , ಕೊನೆಗೂ ಅಯ್ಯನ ಮಾತನ್ನ ಕೇಳಲಾಗಲಿಲ್ಲ (ಹೊಟ್ಟೆಪಾಡಿಗಾಗಿ   ದೂರದೂರಿನಲ್ಲಿ ಬಂದು ನೆಲೆಸಿದ್ದೆ  ಇದ್ದಕ್ಕೆ   ಕಾರಣ, ಎನ್ನುವ ಬೇಸರ ಒಂದೆಡೆ )ಇಗಾ ಅಯ್ಯ ಬೇಕೆಂದರು ಮತ್ತೆ ಸಿಗಲಾರ ಯಾರನ್ನ ಕೇಳುವುದು ವಿದಿಯನ್ನೇ ಅಥವಾ ನಮ್ಮ ಹೊಟ್ಟೆಯನ್ನೇ 

ಇದಕ್ಕೆ ಸ್ನೇಹಿತರೆ ಯಾರೂ  ನಿಮ್ಮ ಅಜ್ಜ- ಅಜ್ಜಿ ಅಪ್ಪ- ಅಮ್ಮ ನನ್ನು ಮಿಸ್ ಮಾಡಿಕೊಳ್ಳಬೇಡಿ. ಒಮ್ಮೆ ಕಳೆದುಕೊಂಡರೆ ಮತ್ತೆ ಬೇಕೆಂದರು ಸಿಗಲಾರರು, ಅವರ ಪ್ರೀತಿಯ ಕೊಡಲಾರರು,)

ಹೇಗೆ ಇರಲಿ ನಾವು ಅವರ ಪಾದದ ಹೂವುಗಳು ಜೀವನದುದ್ದಕ್ಕೂ ಕಸ್ಟ್ಟಪಟ್ಟ ಅಯ್ಯ ಮುಂದಿನ ಜನುಮದಲ್ಲದರು ಸುಖವಾಗಿರಲಿ ಅಯ್ಯ ನೀನು ನಮ್ಮನಗಲಿದರು ನಿನ್ನ ನೆನಪು ಮಾತ್ರ ಶಾಶ್ವತ ನೀ ಕೊಟ್ಟ ಪ್ರೀತಿ ಬೇರೆಯಾರಿಂದಲೂ ಕೊಡಲು ಸಾದ್ಯವಿಲ್ಲ ನಮ್ಮನ್ನ ಎತ್ತಿ ಆಡಿಸಿ ಬೆಳೆಸಿ ನಿನ್ನ ಕರ್ತವ್ಯವನ್ನ ನಿ ಮುಗಿಸಿದೆ ಆದ್ರೆ ನಿನ್ನ ಕೊನೆದಿನಗಳಲ್ಲಿ ನಿನ್ನ ಸೇವೆಮಾಡೋ ದಿರಲಿ ನೀ ಕೊನೆಯುಸಿರೆಳೇಯುವಾಗ ಕೂಡ ನಿನ್ನ ಬಳಿ ಇರಲು  ಸಾದ್ಯವಿಲ್ಲದೆ ಹೊಇತು ನೀ ಕೊಟ್ಟ ಪ್ರೀತಿ ನೀ ತೋರಿದ ಕಾಳಜಿ ಮೂರು ಜನ್ಮ್ಮಗಳಿಗಾಗುವಸ್ಟುನಿಂಗೆ ನಮ್ಮಿಂದ ಕೊಡಬಹುದೆಂದರೆ  ನಿನ್ನ ( ಅಯ್ಯನ) ಆದರದ ಪ್ರೀತಿಗೆ ಕಣ್ಣ ಹನಿಗಳೇ ಕಾಣಿಕೆ. ನಾವು ಅವರಿಗೆ ಕೊಡಲು ಇಸ್ಟ್ಟುಮಾತ್ರಸಾದ್ಯ 
  ಮುಂದಿನ ಜನುಮದಲಾದರು ಯಾರ ಹಂಗಿಲ್ಲದೆ ಸುಖವಾಗಿಬಾಳು
ಆ ದೇವರು ನಿನ್ನನ್ನ ಚನ್ನಾಗಿ ಇಟ್ಟಿರಲಿ ಹೋಗಿ ಬಾ ಅಯ್ಯ





Sunday, 29 July 2012








ಮೊಬೈಲ್ಮಾಯೆಯಲ್ಲಿ ಕಳೆದುಹೊಗುತ್ತಿರುವ ಭಾವುಕತೆಯ ಕ್ಷಣಗಳು ................!!

ಬೆಂಗಳೂರಿಂದ ಊರಿಗೆ ಹೋಗಲು ರಾತ್ರಿಯ ದುರ್ಗಾಂಬ ಬಸ್ಸಿನಲ್ಲಿ ಹತ್ತಿ ಕುಳಿತ್ತಿದ್ದೆ. ಪ್ರಯಾಣಿಕರು ಒಬ್ಬೊಬ್ಬರಾಗಿ ಹತ್ತಿಕೊಳ್ಳುತ್ತಿದ್ದರು. ಮೊಬೈಲ್‌ನಲ್ಲಿ  ಮಾತಾಡುತ್ತಲೇ ಒಳಗೆ ಬಂದ ಒಬ್ಬ ಯುವಕ ಒಂದೆರಡು ಸೀಟು ದಾಟುತ್ತಿದ್ದಂತೆಯೇ ತನ್ನ ಇನ್ನೊಂದು ಕೈಯಲ್ಲಿದ್ದ  ಎರಡು ಮೂರು ಲಗೇಜ್‌ಗಳನ್ನು ಕೆಳಗಿಟ್ಟು  ಅಲ್ಲೇ ತಟಸ್ಥನಾದ. ಇತರ ಪ್ರಯಾಣಿಕರು ಅಸಹನೆಯಿಂದ ಅವನ ಬೆನ್ನನ್ನು ತಟ್ಟುವ ತನಕ ಅವನ ಮಾತುಗಳು ಮುಂದುವರಿದಿತ್ತು. ಅಂತೂ ಒಂದು ಹತ್ತು ನಿಮಿಷದ ನಂತರ ಎಲ್ಲರೂ ತಂತಮ್ಮ  ಸೀಟುಗಳಲ್ಲಿ  ಸುಖಾಸೀನರಾದರು.ಬಸ್ಸು  ಈಗಿನ್ನೂ  ಹೊರಟಿತಷ್ಟೆ ! ಮುಂದಿನ ಸೀಟಿನ ಮಹಿಳೆ ತನ್ನ  "ಸೆಲ್‌ 'ಅನ್ನು ಕಿವಿಗಾನಿಸಿಕೊಂಡಾಗಿತ್ತು. ""ಅಲ್ವೇ ರೂಪಾ, ಬಸ್ಸು ಈಗ ಹೊರಟಿತು ; ಮರ್ತೇ ಬಿಟ್ಟಿದ್ದೆ  ನೋಡು, ನನ್ನ ಸರಸ್ವತಿ ಕಲರ್‌ ಸೀರೇನ ಇಸ್ತ್ರೀಯವನಿಗೆ ಕೊಡ್ಬೇಡ ಆಯ್ತಾ ! ಅವನೆಲ್ಲಾದ್ರೂ ಸುಟ್ಟುಗಿಟ್ಟು  ಬಿಟ್ಟಾನು... ಹಾಂ ... ಪುಟ್ಟಂಗೆ ಚ್ಯವನಪ್ರಾಶ ಮರೀಬೇಡ....., ' ನನ್ನ ಹಿಂದಿನ ಸೀಟಿನಿಂದ ಒಂದು ಗಂಡು ಧ್ವನಿ  ""ಹೌದೌದು, ಸೀಟೆಲ್ಲಾ  ಸರಿಯಿದೆ, ಹೋಗಿ ಸೇರ್ತಾ ಫೋನ್‌ ಮಾಡ್ತೇನೆ ' ಬಹುಶಃ ಹೆಂಡತಿಗೆ ಗಂಡನ ಆಶ್ವಾಸನೆಯಿರಬಹುದು." " ಈ ಸಲವಾದ್ರೂ  ಚೆನ್ನಾಗಿ ಬರೆ, ಈಚೆ ನಾನೂ ಇರೋದಿಲ್ಲ. ಉಂಡಾಡಿ ಗುಂಡನಂತೆ ಅಲೀಬೇಡ, ಚೆನ್ನಾಗಿ ಓದು' ಮಗನಿಗೆ ತಾಯಿಯ ಉಪದೇಶ.

" ಬರೀ ಎರಡೇ ದಿನ ತಾನೇ ಸ್ವೀಟೀ! ಹೀಗೆ ಹೋಗಿ ಹಾಗೆ ಬಂದಿºಡ್ತೇನೆ ' ಮೊಬೈಲಿಗೆ ಮುತ್ತು ಕೊಡುವ ಯುವಕ. ನನ್ನ ಪಕ್ಕದಲ್ಲಿ  ಕಿಟಕಿಯ ಬಳಿ ಕುಳಿತಿದ್ದ  ಯುವತಿ ಆಗಾಗ ನಾಚಿಕೊಳ್ಳುತ್ತ, ಮುಖ ಕೆಂಪೇರಲು, ಇಹದ ಪರಿವೆಯೇ ಇಲ್ಲದೆ ಕುಸುಕುಸು ಎಂದು ಅವಿರತವಾಗಿ ಅದೇನೋ ಉಲಿಯುತ್ತಿದ್ದಳು.

ಬಸ್‌ ನೆಲಮಂಗಲ ದಾಟಿದರೂ ತರತರದ "ರಿಂಗ್‌ - ಟೋನ್‌ಗಳು, ಹಲೋ, ಹಾಯ್‌ಗಳು ! ವ್ಯವಹಾರದ ಕೆಲವು ನೀರಸವಾದ ಮಾತುಕತೆಗಳನ್ನು ಬಿಟ್ಟರೆ ಉಳಿದೆಲ್ಲವುಗಳಲ್ಲೂ  ಧ್ವನಿಸುವುದು ತಂತಮ್ಮ  ಬಂಧು, ಬಾಂಧವರ ಅಥವಾ ಗೆಳೆಯರ ಕುರಿತಾದ ಅಭಿಮಾನ, ಪ್ರೀತಿ, ಕಾಳಜಿ !

ಈ ಬಗ್ಗೆ  ಆಲೋಚಿಸುತ್ತಿದ್ದಂತೆ ಅದೇಕೋ ಅಪ್ರಯತ್ನವಾಗಿ ನನ್ನ ಸ್ಮತಿಪಟಲದಲ್ಲಿ  ನನ್ನ ಬಾಲ್ಯದ ಒಂದು ನೆನಪು ಮೂಡಿ ಬಂತು. ಸುಮಾರು 10 ವರ್ಷಗಳಷ್ಟು  ಹಳೆಯ ನೆನಪು !

ಹೊರಬಾಗಿಲ ಪಕ್ಕದಲ್ಲಿ ಸುಟ್ಕೆಸ್ ಮತ್ತು ಕೈಯಲ್ಲಿ ಒಂದು ಬ್ಯಾಗು! ಇನ್ನೂ  ಹದಿನಾರು ಅಥವಾ ಹದಿನೇಳರ ಅಣ್ಣ "ಹೋಗಿ ಬರುತ್ತೇನೆ ' ಎಂದು ಪುನರುಚ್ಚರಿಸುತ್ತ ಎಲ್ಲ ಹಿರಿಯರ ಕಾಲಿಗೆ ಬಿದ್ದು ಬಿದ್ದು ಏಳುತ್ತಾನೆ. ಅಮ್ಮನಾದರೂ ಒದ್ದೆ ಕಣ್ಣನ್ನು ಸೆರಗಿನಿಂದ ಒರಸಿಕೊಳ್ಳುತ್ತ ಅಳುದನಿಯಲ್ಲಿ  ಎಡೆಬಿಡದೆ ಉಪದೇಶ ಮಾಡುತ್ತಿದ್ದಾಳೆ. "ಹಾಳೂ ಮೂಳೂ ತಿನ್ಬೇಡ, ವಾರಕ್ಕೊಂದು ಸಲ ಎಣ್ಣೆ  ನೀರು ಹಾಕ್ಕೋ, ಕೆಟ್ಟ  ಹುಡುಗರಿಂದ ದೂರ ಇರು, ಮಲಗೋ ಮುಂಚೆ ಲಕ್ಷ್ಮೀ ನರಸಿಂಹ ಹೇಳು... ಪತ್ರ ಹಾಕು......'

ಎಲ್ಲದಕ್ಕೂ ಸರಿ ಸರಿ ಎಂದು ತಲೆಯಾಡಿಸುವ ಅಣ್ಣ  ಬ್ಯಾಗು ಎತ್ತಿಕೊಂಡರೆ, ಸುಟ್ಕೆಸ್ ಎತ್ತಿಕೊಳ್ಳುವ ಅಪ್ಪ  ಮನೆಯ ಅಂಗಳ, ಗೇಟನ್ನು  ದಾಟಿ ರಸ್ತೆ ತಿರುವಿನಲ್ಲಿ  ಮರೆಯಾಗುವ ವರೆಗೂ ನೋಡುತ್ತಿರುವ ಅಮ್ಮ ನಿಟ್ಟುಸಿರಿನೊಂದಿಗೆ ಕಣ್ಣೊರಸಿಕೊಂಡು ಒಳಗೆ ಬರುತ್ತಾಳೆ. ಕುಂತಲ್ಲೇ ಬಾi ಹೇಳಿದ್ದ  ಅಜ್ಜ . ದುಕ್ಕವಾದರು ತೋರ್ಪಡಿಸದ ಅಜ್ಜಿ .""ಬಾರೋ ವಾಸು, ನಾಣೀ, ಕಮಲಿ, ತಟ್ಟೆಯಿಡಿ, ಊಟ ಬಡಿಸ್ತೇನೆ .. ಹಸಿವಾಗಲ್ವಾ ' ಎಂದು ಮನೆವಾರ್ತೆಯಲ್ಲಿ  ತೊಡಗಿಕೊಳ್ಳುತ್ತಾಳೆ ಅಮ್ಮ . ಇದೀಗ ತಾನೇ ದೂರದ - ಊರಿಗೆ ದುಡಿಯಲು  ಹೊರಟಿರುವ ಹಿರಿ ಮಗನ ಚಿಂತೆಯನ್ನು ತಾತ್ಕಾಲಿಕವಾಗಿ ಮನಸ್ಸಿನಿಂದ ದೂರ ಮಾಡುತ್ತಾಳೆ.

ಆಗ ನಾವಿದ್ದದ್ದು ನಗರದ ಒಂದು ಸಣ್ಣ  ಊರಿನಲ್ಲಿ. ದೂರದ  ಬೆಂಗಳೂರಿಗೆ ದುಡಿಯಲು  ಈಗ ತಾನೇ ಮನೆ ಬಿಟ್ಟಿರುವ ಅಣ್ಣ  ತುಂತುರು ಮಳೆಯನ್ನು  ಲೆಕ್ಕಿಸದೆ ಬಸ್ಸಿಗಾಗಿ ಕಾಯುತ್ತಾನೆ. ದಡ ದಡ ಸದ್ದಿನೊಂದಿಗೆ ಬರುವ ಬಸ್ಸನ್ನು  ಅವನು ಹತ್ತುತ್ತಿರುವಂತೆ ಬ್ಯಾಗನ್ನು ಹಸ್ತಾಂತರಿಸುವ ಅಪ್ಪ, "" ಜೋಕೆ, ಪತ್ರ ಹಾಕು' ಎಂದಷ್ಟೇ ಹೇಳುತ್ತಾರೆ.

ಶಿವಮೊಗ್ಗ  ರೈಲು ನಿಲ್ದಾಣದಲ್ಲಿ  ಬಸ್ಸಿನಿಂದ ಇಳಿಯುವ ಅಣ್ಣ  ತನ್ನ , ಸಾಮಾನುಗಳನ್ನು ಒಂದೆಡೆಯಿಟ್ಟು , ಅದರ ಮೇಲೆಯೇ ಕುಳಿತುಕೊಂಡು, ಅಮ್ಮ  ಕೊಟ್ಟಿದ್ದ  ಮೆಂತೆ ದೋಸೆಯನ್ನು ತಿನ್ನುತ್ತ  ಆಗಾಗ ಹಿಂಗೈಯಿಂದ ಕಣ್ಣೊರಸಿಕೊಳ್ಳುತ್ತಾನೆ.

ರಾತ್ರಿ 11ಕ್ಕೆ ಬರುವ - ಆಗಲೇ ತುಂಬಿರುವ ರೈಲಿಗೆ ಇತರ ಪ್ರಯಾಣಿಕರೊಂದಿಗೆ ತಾನೂ ನುಗ್ಗುವ ಅಣ್ಣ  ಹೇಗಾದರೂ ರೈಲಿನೊಳಗೆ ತೂರಿಕೊಂಡು, ಅಷ್ಟೇನೂ ಪ್ರಶಸ್ತವಲ್ಲದ ಒಂದು ಬೆಂಚಿನಲ್ಲಿ  ಜಾಗ ಪಡೆಯುತ್ತಾನೆ. ಕೂತಲ್ಲೇ ತೂಕಡಿಸುತ್ತ  ಇರುಳು ಕಳೆದಿರಲು ಮರುದಿನ ಬೆಳಿಗ್ಗೆ ಇಳಿಯುವಾಗ ರೈಲಿನ ಮಸಿಯಿಂದ ಕಪ್ಪಾಗಿರುವ ಅಣ್ಣ ಹಸಿವು, ಬಳಲಿಕೆಗಳಿಂದ ಕಂಗಾಲಾಗಿರುತ್ತಾನೆ.  ಸಿಟಿ ಸೇರಿದ ಸಮಾಧಾನದಲ್ಲಿ   ಚಿಕ್ಕಪ್ಪನ ಮನೆ  ಸೇರಿ ಸ್ನಾನ, ಊಟ ಮುಗಿಸುವಾಗ ದಿನ ಮುಗಿದಿರುತ್ತದೆ. ಮರುದಿನ   ಕೆಲಸಕ್ಕೆ  ಹೋಗಿ  ಬಂದು ಸಂಜೆ ಅಚ್ಚುಕಟ್ಟಾಗಿ ಒಂದು ಪೋಸ್ಟ್‌  ಕಾರ್ಡನ್ನು ತಂದು ಅದರಲ್ಲಿ  ಪುಟ್ಟ  ಅಕ್ಷರಗಳಲ್ಲಿ  ಮೂರು ದಿನಗಳ ಕಾಲ ಪತ್ರ ಬರೆದು ಅಂಚೆಗೆ ಹಾಕುತ್ತಾನೆ. ಆ ಪತ್ರ ಒಂದು ವಾರ ಪಯಣಿಸಿ ಹತ್ತನೆಯ ದಿನ ಹೆತ್ತವರಿಗೆ ತಲುಪಿದಾಗ ಇಲ್ಲಿ  ಹಬ್ಬದ ವಾತಾವರಣ !

"" ಕೇಳಿದ್ಯೆàನೆ, ಪುಟ್ಟು  ಕ್ಷೇಮವಾಗಿ ಸೇರಿದ್ದಾನಂತೆ!' ಎನ್ನುವ ತಂದೆಯವರೊಂದಿಗೆ " ""ಹೌದೇ  ಎಂದು ದನಿಗೂಡಿಸಿ ಸಂತಸಪಡುವ ಅಮ್ಮ  ಆ ಪತ್ರವನ್ನು ಮತ್ತೆ ಮತ್ತೆ ಓದಿ ನಿಲುವಗನ್ನಡಿಯ ಹಿಂದೆ ಜೋಪಾನವಾಗಿ ಸಿಕ್ಕಿಸಿ ಬಿಡುತ್ತಾಳೆ.ಇನ್ನು  ಮುಂದಿನ ರಜೆ ಯಾವಾಗಲೋ ?ಎಂದು ತನ್ನಷ್ಟಕ್ಕೆ' ಹೇಳಿಕೊಳ್ಳುತ್ತಾಳೆ.

ದುಡಿಮೆಗೆಂದು ಮನೆಯಿಂದ ಹೋಗುವ ಮಗನು ಪ್ರಯಾಣದಲ್ಲಿ , ಪರವೂರ ವಾಸ್ತವ್ಯದಲ್ಲಿ  ಎದುರಿಸುವ ಕಷ್ಟಗಳ ಕಲ್ಪನೆ ಅವಳಿಗಿಲ್ಲವೆಂದಲ್ಲ; ಆದರೆ ತಾನು ಅನುದಿನ ಮಾಡುವ ಪ್ರಾರ್ಥನೆ ಮತ್ತು ಹಿರಿಯರ ಆಶೀರ್ವಾದದಿಂದ ಮಗನು ಜಯಶಾಲಿಯಾಗುವನೆಂಬ ದೃಢ ನಂಬಿಕೆಯೇ ಅವಳ ಬಲ !

ಆ ಕಾಲವೇ ಹಾಗಿತ್ತು ! ಮಕ್ಕಳನ್ನು ದೂರದೂರಿಗೆ ಕಳುಹಿಸಿ ಅವರಿಂದ ಬರುವ ಪತ್ರಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಪರಿಸ್ಥಿತಿ ! ಈಗ ಇದೋ, "ಮೊಬೈಲ್‌ ' ಎಂಬ ಪುಟ್ಟ  ಉಪಕರಣ ಮತ್ತು ಇದರ ಅಕ್ಕತಂಗಿಯರಿಂದಾಗಿ ಇಡೀ ವಿಶ್ವವೇ ಕುಗ್ರಾಮವೆನಿಸಿದೆ. ಒಂದು ಗುಂಡಿಯನ್ನು ಒತ್ತಿದರೆ ಸಾಕು, ಸಪ್ತ ಸಮುದ್ರದಾಚೆಯಿರುವ ನಿಮ್ಮ ಬಾಂಧವರನ್ನು ಸಂಪರ್ಕಿಸಿ ಅವರ ಧ್ವನಿಯನ್ನೂ  ಕೇಳಬಹುದು. ಕಿರು ಬೆರಳಿಗಿಂತಲೂ ಕಿರಿದಾದ ಯಂತ್ರದಿಂದ, ಇನ್ನೊಂದು ಭೂ ಖಂಡದಲ್ಲಿರುವ ದೈನಂದಿನ ಚಟುವಟಿಕೆಗಳನ್ನು, ಯೋಗ ಕ್ಷೇಮ ವಿಚಾರಗಳನ್ನೂ  ಪರದೆಯ ಮೇಲೆ ಪ್ರತ್ಯಕ್ಷವಾಗಿ ನೋಡಬಹುದು. ಅಂದ ಮೇಲೆ ಈ ಹೊಸ ಆವಿಷ್ಕಾರಗಳು ವಿಶ್ವಬಾಂಧತ್ವವನ್ನು, ಪರಸ್ಪರರಲ್ಲಿ  ಆದರಾಭಿಮಾನಗಳನ್ನು ವೃದ್ಧಿಸಲು (ಎಸ್ಟೋ ಮನೆಗಳನ್ನ ಹಾಳುಮಾಡಲು)ಸಹಕಾರಿಯಾಗಿವೆ ಎಂದು ತಾರ್ಕಿಕವಾಗಿ ಹೇಳಬಹುದೇನೋ !

ಆದರೆ ಇಂದು ಆಗುತ್ತಿರುವುದು ಅದರ ವಿರುದ್ಧ ಪರಿಣಾಮಗಳು. ! ಎಲ್ಲೆಲ್ಲೂ  ಅಭದ್ರತೆಯ ಭಾವನೆ !  ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ ಮಕ್ಕಳಿರುವಾಗ, ತಮ್ಮ ಹೆಂಡತಿ- ಮಕ್ಕಳನ್ನೇ ನಿರ್ದಾಕ್ಷಿಣ್ಯವಾಗಿ ಹೊಡೆಯುವ ಅಪ್ಪಂದಿರುವಾಗ ಇಂಥ ಸ್ಥಿತಿಗೆ ಏನೆನ್ನಬೇಕು? ಒಂದು ಸೆಂಟ್ಸ್‌  ಜಾಗದಲ್ಲಿರುವ ಸೂರಿಲ್ಲದ ಮನೆಗಾಗಿ ಹೊಡೆದಾಡುವ ರಾಮ, ಸೋಮ ಸಹೋದರರು ಇಲ್ಲಿ  ; ಅಂತೆಯೇ ದೊಡ್ಡ  ಉದ್ಯಮಪತಿಗಳಾಗಿದ್ದೂ  ಪರಸ್ಪರ ಔಡು ಕಚ್ಚುವ ಅಂಬಾನಿ ಸೋದರರು ಅಲ್ಲಿ !

ವರ್ಷಗಟ್ಟಲೆ ಫೋನ್‌ ಮಾತಾಡಿ, ಹೊಟೇಲ್‌, ಸಿನೆಮಾ ತಿರುಗಿ ಆನಂತರ ನಡೆಯುವ ಮದುವೆಗಳಲ್ಲೂ  ಹತ್ತರಲ್ಲಿ  ನಾಲ್ಕು ವಿಚ್ಛೇದನದಲ್ಲಿ  ಕೊನೆಗೊಳ್ಳುತ್ತವೆ.ಹೇರಳವಾಗಿ ಸಂಪಾದಿಸುತ್ತ ಸುಖೋಪಕರಣಗಳನ್ನು ಹೊಂದಿರುವ  ಮಕ್ಕಳಾ ಹೆತ್ತವರು  ಕೆಲಸದವಳ ಕಣ್ಗಾವಲಿನಲ್ಲಿ  ಅಥವಾ ದೂರದ ಬೋರ್ಡಿಂಗ್‌ನಲ್ಲಿದ್ದಾರೆ ! ಹತ್ತಾರು ಸಣ್ಣ, ದೊಡ್ಡ  ರೋಗಗಳಿಂದ ನರಳುತ್ತಿರುವ ಮುದಿ ತಾಯಿ - ತಂದೆ ವೃದ್ಧಾಶ್ರಮದಲ್ಲಿ ! ಎಲ್ಲರಿಗೂ ತಮ್ಮ ನಿಲುವೇ ಸರಿ ! ಯಾರೂ ಇಲ್ಲಿ.  ಯಾರಿಗಾಗಿಯೂ ಬಿಟ್ಟುಕೊಡುವ.  ಹೊಂದಿಕೊಳ್ಳುವ ಮಾತೇ ಇಲ್ಲ ! ತನ್ನ ಮನೆಯೊಳಗೇ ಹೊಂದಿಕೆಯಿಲ್ಲದ ಮೇಲೆ ನೆರೆಮನೆ, ನೆರೆ ರಾಜ್ಯ, ನೆರೆ ದೇಶಗಳೊಂದಿಗೆ ಗೆಳೆತನ ಸಾಧ್ಯವೇ ಎಲ್ಲೆಲ್ಲೂ  ಅಹಂ ಮತ್ತು ಸ್ವಾರ್ಥ !

ಈ ತರ ಮೃದು ಭಾವನೆಗಳನ್ನು ಜೀವಂತವಾಗಿಡಲು ಅಸಮರ್ಥವಾಗಿ ಹೋದ ಈ ಆವಿಷ್ಕಾರಗಳ ಬಗ್ಗೆ  ಚಿಂತಿಸುತ್ತ ಹಾಗೆಯೇ ನಿದ್ರೆಗೆ ಜಾರಿದೆ. ಮತ್ತೆ ಎಚ್ಚರವಾದದ್ದೂ  ಮೊಬೈಲ್‌ ಧ್ವನಿಗಳಿಂದಲೇ. "" ಹಾಂ ,  ನಗರ,,,        ಆಗಲೇ ಹೋಗಿಯಾಯಿತು, ಈಗ  ಚಿಕ್ಕಪೇಟೆ  '      ""ಕಾರು ಬೇಡಪ್ಪ, ರಿಕ್ಷಾ ಸಿಗುತ್ತೇ...' ಇತ್ಯಾದಿ.

ನಾನು ಇಳಿಯುವ ಸ್ಥಳ ಸಮೀಪಿಸುತ್ತಿರಲು, ನನ್ನ ಚೀಲಗಳನ್ನು ಜೋಡಿಸುತ್ತಿದ್ದಂತೆ ನನ್ನ ಕಣ್ಣುಗಳು ಮಂಜಾದವು.ಹೌದು ಹದಿನೈದು ದಿನಗಳ ಹಿಂದೆ, ತಮ್ಮ 80ನೇ ವಯಸ್ಸಿನಲ್ಲಿ , ( ಮಕ್ಕಳು ಸರದಿಯಂತೆ ಅಕ್ಕರೆಯಿಂದ  ಗೌರವದಿಂದ ನೋಡಿಕೊಂಡರು ಅನ್ನಬೇಕಟ್ಟೆ).ಅಜ್ಜ  ಹಾಸಿಗೆ ಹಿಡಿದಾಗ ಅವರನ್ನ" ' ಎತ್ತಿ ಇಳಿಸಿ ಪಕ್ಕದಲಿದ್ದ ನಮ್ಮಪ್ಪ  ೫೦ ರ ಪ್ರಾಯವಾದರೂ  ೮೦ ರ ಅಪ್ಪನಿಗಾಗಿ ಬಿಕ್ಕಿ ಬಿಕ್ಕಿ ಅತ್ತಿದನ್ನು ಮರೆಯಲಾದೀತೆ !!ಇಂತ್ತ ಮಕ್ಕಳು ಮುಂದೆ ಸಿಗುವರೇ

Sunday, 24 June 2012


ನನ್ನೊಲುಮೆಯಹುಡುಗಿಗೆ ''''''''''''


ಇದೊಂದು ಹುಚ್ಚು ಪ್ರಯತ್ನವಸ್ತ್ತೆ ......................

ಓ ಮನವೇ- ಪ್ರೇಮದ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ನನಗೆ "ಪ್ರೀತಿಸು ಬಾ" ಎಂದು ನನ್ನ ಬದುಕಿನ ಹಾದಿಯ ದಿಕ್ಕನೇ ಬದಲಾಯಿಸಿದೆ.ದಿನವಿಡೀ ನಿನ್ನ ಜ್ಞಾಪಕವೇ ನನ್ನ ಕಾಯಕವಾಯಿತು. ಎಲ್ಲಿ ನಾ ಹೋದರೂ ಅಲ್ಲಿ ನೀ ಕಾಣೆವೇ.ನಾ ನನ್ನ ಮರೆತಾಗಿದೆ. ಭೂಮಿ-ಆಕಾಶವೇ ಪ್ರೇಮದ ಸಂಕೇತವಾಗಿದೆ. ನನ್ನ ಕನಸು ನಿಜವಾದ ಹಾಗೇ ಕನಸಾಗಿದೆ.

ನಿನ್ನೊಂದಿಗೆ ಇಡುವ ಪ್ರತಿಯೊಂದು ಹೆಜ್ಜೆಯು ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು.ಕಲ್ಲು-ಮುಳ್ಳಿನ ಹಾದಿಯು ಹೂವಿನ ಹಾಗೇ ಭಾಸವಾಗುತ್ತಿತ್ತು. ನನಗೆ ನೀನೇ ಎಲ್ಲವಾಗಿದೇ .ನಿನಗೂ ಕೂಡ ಹಾಗೇ ಅನಿಸಿರಬೇಕು ಎಂದು ನಾನು ತಿಳಿಯುವ ಮುನ್ನವೇ ಪ್ರೀತಿಯ ಸರಪಣಿ ಸವೆದದು ನನ್ನ ಗಮನಕ್ಕೆ ಬರದೇ ಹೋಯಿತು. ಓ ಹೃದಯ ಈ ನೋವಿಗೆ ನೀನೇ ನೆಮ್ಮದಿ ಹೇಳು. ನಾ ಹೇಳುವ ಮಾತು ನಿಜವಾದರು ಕೇಳುವವರು ಯಾರು ಇಲ್ಲ ,ನನ್ನ ಈ ನೋವು ತುಂಬಿದ ಮಾತನ್ನು. 

ಪ್ರತಿಯೊಂದು ನಿಮಿಷ ಯುಗಯುಗವಾಗಿದೆ. ನನ್ನ ಬಿಟ್ಟು ಎಲ್ಲಿ ಹೋದೇ, ನೀ ಇಲ್ಲದ ನನಗೆ ಎಲ್ಲವೂ ಶೂನ್ಯ. ಯಾಕಾಗಿ ನನ್ನಿಂದ ಮೌನವಾಗಿ ದೂರವಾದೇ . ನಾ ನಿನಗೆ ಬೇಡವಾಡದವನಾಗಿ  ಹೋದೆನಾ? ಅಥವಾ ಈ ಪ್ರೀತಿ ನಿನಗೆ ಬೇಡವಾಯಿತೇ? ಎಂದು ತಿಳಿಯದಷ್ಟು ನತದೃಷ್ಟನಾಗಿ  ಹೋದೆ.ಒಮ್ಮೆ ಬಾ...ಎಲ್ಲಿದರು .ನೀ  ನನ್ನ  ಮರೆತು ಬಿಡು ಎಂದು ಹೇಳಿ ಹೊರಟು ಹೋದೆ. ಆದರೇ ಈ ಜೀವದ ಪ್ರತಿಯೊಂದು ಕಣ -ಕಣದಲ್ಲಿಯೂ ನಿನ್ನ ಹೆಸರೇ ಆಡಗಿದೇ. .ಈ ಹೃದಯ ನಿನ್ನ ಬರುವಿಕೆಗಾಗಿ ಹಾತೊರೆಯುತ್ತಿದೆ. ನೀ ಇಲ್ಲದ ನನ್ನ ಮುಂದಿನ ಬದುಕು ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೇ. ನಿನ್ನ ಮಾತಿಲ್ಲದೇ, ನಿನ್ನ ನಗುವಿಲ್ಲದೇ ಶವದoತ್ತಾಗಿದೇ ನನ್ನ ಬದುಕು . ನಾ ಕಟ್ಟಿದ ಕನಸುಗಳ ಗೋಪುರವನ್ನು ಚದುರಿ ಹೋಗಲು ಬಿಡಬೇಡ ಪ್ಲೀಸ್.. . ನನ್ನ ಉಸಿರು ನಿಂತು ಹೋಗುವ ಮುನ್ನ ಒಮ್ಮೆ ಬಾ,,,,,,,,,


ಹೆಚ್ಚು ಪೀಲ್ ಆಗ್ಬೇಡಿ...............! ನಿನ್ನೆ  ಮನಸ್ಸಿಗೆ ಏಕೋ ಬೇಸರ ಎನಿಸಿತು ಏನು ಮಾಡೋದು ಅಂದು ಕುಳಿತಿದ್ದೆ  ಆಗ ತಟ್ಟನೆ ...........! ನೆನಪಾಗಿದ್ದು ಕಾಪಟಿನಲಿದ್ದ ಪುಸ್ತಕಗಳು ..... ಅವು ಬಿಡಿ.... ಅವಗಳ ಹೆಸರೇ ಕಾಣದಸ್ಟು ದುಳನ್ನ ಮೆತ್ತಿಕೊಂಡು ಬಿದ್ದಿದ್ದವು .... ದೂಳು.. ಕೊಡವಿ ಪುಟ ತಿರುವಿದಾಗ ಕಾಲೇಜು ದಿನಗಳಲ್ಲಿ ಎಂದೋ ಬರೆದು. ಕೊಡಲು ಮಿಟೆರ್ ಇಲ್ಲದೆ ಮಡಿಚಿಟ್ಟ ಪತ್ರ ವಿದು............,'ಸ್ನೇಹಿತರೇ ನಿಮ್ಮ ಜೀವನದಲ್ಲೂ  ನಡೆದಿದ್ದನ್ನು ಬರಹ ರೂಪ ಕೊಟಿದ್ದರೆ ಬರೆದು ಪೋಸ್ಟ್ ಮಾಡಿ, 

Friday, 22 June 2012


ಮಲೆನಾಡಿನ ಸ್ನೇಹಿತರೆ ...................!!!






ದೂರದ     ಸಿಟಿಯಲ್ಲಿ ಕುಳಿತು, ವಾಹನಗಳ ಕಿರಿ ಕಿರಿಯಲ್ಲಿ, ಟ್ರಾಫಿಕ್ ಜಾಮ್ ಎಂಬ ಪೆಡಂಭೂತದ ಮದ್ಯೆ, ಜನಸಂದಣಿಯ  ರಗಳೆಯಲ್ಲಿ,ವಾಹನಗಳ ಹೊಗೆಯನ್ನು ಸಹಿಸದೆಯೂ ಸಹಿಸಲೇಬೇಕಾಗಿರುವ ದುರ್ವಿಧಿಯಲ್ಲಿ,ಕಿವಿ ಗಡಚಿಕ್ಕುವ ಶಬ್ಧಗಳ ಸಂತೆಯಲ್ಲಿ,ಜೀವನಕ್ಕಾಗಿ ದುಡಿದು ದಣಿಯಲೇಬೇಕಾದ ಸಂದಿಗ್ಧತೆಯಲ್ಲಿ, ಕುಳಿತಿರುವ ಮಹಾನಗರಿಯ        ಓ ನನ್ನ   ಸ್ನೇಹಿತರೇ
ನಿಮಗಿದೋ ಸುಂದ಻ರ಻ ಮ಻ಲೆನಾಡಿಗೆ ಸ್ವಾಗ಻ತ
 ಮಲೆಗಳ ನಾಡು, ವಿಂದ್ಯಪರ್ವತಗಳ ತಪ್ಪಲು ಈ ಮಲೆನಾಡು, ಬರೋಬ್ಬರಿ ತಿಂಗಳುಗಟ್ಟಲೆ ಮಳೆ ಗಿಜಿಗುಡುವ    ನಾಡು ಈ ಮಲೆನಾಡು,
ಮುಂಜಾನೆಯೆನ್ನದೆ, ರಾತ್ರಿಯೆನ್ನದೆ ದಟ್ಟ ಆವಿಯನ್ನು ಹೊರಸೂಸುತ್ತಾ ಇಡೀ ಪ್ರಕೃತಿಯನ್ನೇ ತನ್ನ ಮಡಿಲೊಳಗೆ ಹಾಕಿಕೊಂಡು ನೋಡುಗರಿಗೆ ನಿರಾಶೆಯ ಜೊತೆಗೆ ರಸದೌತಣವನ್ನು ನೀಡುವುದೇ ಈ ಮಲೆನಾಡು .
ಒಮ್ಮೆ ಬಂದು ಈ ಪ್ರಕೃತಿಯ಻ ಸೊಬಗನ್ನು ಕ಻ಣ್ಣಾರೆ ಕಂಡು, ಮ಻ನಸೂರೆಗೊಂಡು, ಈ ನಮ್ಮ ಮ಻ಲೆನಾಡಿನ಻    ಸೊಬ಻ಗ಻ನ್ನು, ಸುಂದ಻ರ ಪ್ರಕೃತಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟು, 
ನಿಮ್ಮಮನಸಿನಲ್ಲಿ ಅಚ್ಚಳಿಯದ ನೆನಪನ್ನು ಹೊತ್ತುಕೊಂಡು ಮತ್ತದೇ ನಿಮ್ಮ ಮಾಮೂಲಿ ಅನಿವಾರ್ಯ ವಾಸಸ್ಥಾನಕ್ಕೆ ಒಲ್ಲದ ಮನಸ್ಸಿನಿಂದ  ಹೋಗಿ ಬನ್ನಿ

ವಂದನೆಗಳೊಂದಿಗೆ                                                                                            ಪ್ರಶಾಂತ್ ರಾಜ್ ಎಂ