Sunday, 24 June 2012


ನನ್ನೊಲುಮೆಯಹುಡುಗಿಗೆ ''''''''''''


ಇದೊಂದು ಹುಚ್ಚು ಪ್ರಯತ್ನವಸ್ತ್ತೆ ......................

ಓ ಮನವೇ- ಪ್ರೇಮದ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ನನಗೆ "ಪ್ರೀತಿಸು ಬಾ" ಎಂದು ನನ್ನ ಬದುಕಿನ ಹಾದಿಯ ದಿಕ್ಕನೇ ಬದಲಾಯಿಸಿದೆ.ದಿನವಿಡೀ ನಿನ್ನ ಜ್ಞಾಪಕವೇ ನನ್ನ ಕಾಯಕವಾಯಿತು. ಎಲ್ಲಿ ನಾ ಹೋದರೂ ಅಲ್ಲಿ ನೀ ಕಾಣೆವೇ.ನಾ ನನ್ನ ಮರೆತಾಗಿದೆ. ಭೂಮಿ-ಆಕಾಶವೇ ಪ್ರೇಮದ ಸಂಕೇತವಾಗಿದೆ. ನನ್ನ ಕನಸು ನಿಜವಾದ ಹಾಗೇ ಕನಸಾಗಿದೆ.

ನಿನ್ನೊಂದಿಗೆ ಇಡುವ ಪ್ರತಿಯೊಂದು ಹೆಜ್ಜೆಯು ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು.ಕಲ್ಲು-ಮುಳ್ಳಿನ ಹಾದಿಯು ಹೂವಿನ ಹಾಗೇ ಭಾಸವಾಗುತ್ತಿತ್ತು. ನನಗೆ ನೀನೇ ಎಲ್ಲವಾಗಿದೇ .ನಿನಗೂ ಕೂಡ ಹಾಗೇ ಅನಿಸಿರಬೇಕು ಎಂದು ನಾನು ತಿಳಿಯುವ ಮುನ್ನವೇ ಪ್ರೀತಿಯ ಸರಪಣಿ ಸವೆದದು ನನ್ನ ಗಮನಕ್ಕೆ ಬರದೇ ಹೋಯಿತು. ಓ ಹೃದಯ ಈ ನೋವಿಗೆ ನೀನೇ ನೆಮ್ಮದಿ ಹೇಳು. ನಾ ಹೇಳುವ ಮಾತು ನಿಜವಾದರು ಕೇಳುವವರು ಯಾರು ಇಲ್ಲ ,ನನ್ನ ಈ ನೋವು ತುಂಬಿದ ಮಾತನ್ನು. 

ಪ್ರತಿಯೊಂದು ನಿಮಿಷ ಯುಗಯುಗವಾಗಿದೆ. ನನ್ನ ಬಿಟ್ಟು ಎಲ್ಲಿ ಹೋದೇ, ನೀ ಇಲ್ಲದ ನನಗೆ ಎಲ್ಲವೂ ಶೂನ್ಯ. ಯಾಕಾಗಿ ನನ್ನಿಂದ ಮೌನವಾಗಿ ದೂರವಾದೇ . ನಾ ನಿನಗೆ ಬೇಡವಾಡದವನಾಗಿ  ಹೋದೆನಾ? ಅಥವಾ ಈ ಪ್ರೀತಿ ನಿನಗೆ ಬೇಡವಾಯಿತೇ? ಎಂದು ತಿಳಿಯದಷ್ಟು ನತದೃಷ್ಟನಾಗಿ  ಹೋದೆ.ಒಮ್ಮೆ ಬಾ...ಎಲ್ಲಿದರು .ನೀ  ನನ್ನ  ಮರೆತು ಬಿಡು ಎಂದು ಹೇಳಿ ಹೊರಟು ಹೋದೆ. ಆದರೇ ಈ ಜೀವದ ಪ್ರತಿಯೊಂದು ಕಣ -ಕಣದಲ್ಲಿಯೂ ನಿನ್ನ ಹೆಸರೇ ಆಡಗಿದೇ. .ಈ ಹೃದಯ ನಿನ್ನ ಬರುವಿಕೆಗಾಗಿ ಹಾತೊರೆಯುತ್ತಿದೆ. ನೀ ಇಲ್ಲದ ನನ್ನ ಮುಂದಿನ ಬದುಕು ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೇ. ನಿನ್ನ ಮಾತಿಲ್ಲದೇ, ನಿನ್ನ ನಗುವಿಲ್ಲದೇ ಶವದoತ್ತಾಗಿದೇ ನನ್ನ ಬದುಕು . ನಾ ಕಟ್ಟಿದ ಕನಸುಗಳ ಗೋಪುರವನ್ನು ಚದುರಿ ಹೋಗಲು ಬಿಡಬೇಡ ಪ್ಲೀಸ್.. . ನನ್ನ ಉಸಿರು ನಿಂತು ಹೋಗುವ ಮುನ್ನ ಒಮ್ಮೆ ಬಾ,,,,,,,,,


ಹೆಚ್ಚು ಪೀಲ್ ಆಗ್ಬೇಡಿ...............! ನಿನ್ನೆ  ಮನಸ್ಸಿಗೆ ಏಕೋ ಬೇಸರ ಎನಿಸಿತು ಏನು ಮಾಡೋದು ಅಂದು ಕುಳಿತಿದ್ದೆ  ಆಗ ತಟ್ಟನೆ ...........! ನೆನಪಾಗಿದ್ದು ಕಾಪಟಿನಲಿದ್ದ ಪುಸ್ತಕಗಳು ..... ಅವು ಬಿಡಿ.... ಅವಗಳ ಹೆಸರೇ ಕಾಣದಸ್ಟು ದುಳನ್ನ ಮೆತ್ತಿಕೊಂಡು ಬಿದ್ದಿದ್ದವು .... ದೂಳು.. ಕೊಡವಿ ಪುಟ ತಿರುವಿದಾಗ ಕಾಲೇಜು ದಿನಗಳಲ್ಲಿ ಎಂದೋ ಬರೆದು. ಕೊಡಲು ಮಿಟೆರ್ ಇಲ್ಲದೆ ಮಡಿಚಿಟ್ಟ ಪತ್ರ ವಿದು............,'ಸ್ನೇಹಿತರೇ ನಿಮ್ಮ ಜೀವನದಲ್ಲೂ  ನಡೆದಿದ್ದನ್ನು ಬರಹ ರೂಪ ಕೊಟಿದ್ದರೆ ಬರೆದು ಪೋಸ್ಟ್ ಮಾಡಿ, 

No comments:

Post a Comment